Sep 16, 2009

ನೆಲೆಯ ಕೊಳೆ

ಹೊತ್ತವರು ಹೊರನಾಡವರು
ಬಿಟ್ಟವರು ಬೆಡಗ ನಾಡವರು
ಬೆಳಸಿದವರು ಕರುನಾಡವರು
ಒಂದೂರ ನೆಲೆ
ಮುಂದೂರ ಕೊಳೆ
ಮುಂದೂರ ಮಳೆ
ತೊಳೆದಿತ್ತು ಭುವಿಯ ಪಾಪವನೆಲ್ಲ
ಕಲ್ಲಿರುವೆ ಓಡುತ್ತಿದೆ ಗಾಣದೆತ್ತಿನ ಹಾಗೆ
ನಿಲ್ಲದೆ ಓಡುತ್ತಿದೆ
ಹೊರಟೀದ್ದು ಎಲ್ಲಿಗೆ,
ಆ ನನ್ನ ಗೂಡಿಗೆ, ತಪ್ಪಿದೆ ದಾರಿ,
ತಿರುಗಿ ತಿರುಗಿ ಅಲ್ಲೇ ತಿರುಗಿ
ಸುತ್ತಲು ಕಲ್ಲು ,
ಎತ್ತೆತಲು ಕಲ್ಲು
ಜಗತ್ತಿನ ಕೊಳೆ ಮನಸ್ಸಿನ ಹಾಗೆ.
"ವಿಹಾರಿ"

No comments:

Post a Comment