Feb 20, 2010

ಕಾಗದ ಬಂತು ಕಾಗದ

ತೀರ್ಥರೂಪು ತಂದೆಯವರಿಗೆ, ಮಾತೃಶ್ರೀ ತಾಯಿಯವರಿಗೆ, ಶ್ರೀ, ಕ್ಷೇಮ, ಪ್ರೀತಿಯ ತಂಗಿಗೆ, ಯಾಕ್ರೀ ನೆನಪು ಬರ್ತ ಇಲ್ವಾ , ಸಾಮಾನ್ಯವಾಗಿ ೧೯೮೫ ರ ನಂತರ ಹುಟ್ಟಿರುವರಿಗೆ ಈ ಪದಗಳು ಲ್ಯಾಟಿನ್ ತರ ಕೆಳಿಸ್ತವೆ, ಯಾಕಂದ್ರೆ ೯೦ ರ ಹೊತ್ತಿಗೆಲ್ಲ ಇಮೇಲ್ ಬಂದು ಕೂತಿತ್ತು, ಅಲ್ಲಿಂದ ಮುಂದಕ್ಕೆ ನಿಮಗೆಲ್ಲ ಗೊತ್ತೇ ಇದೆ. ಈ ಕಾಗದ ಅನೋದು ಎಷ್ಟೊಂದು ಹಳೆಯ ಸಂಸ್ಕೃತಿಯ ಪ್ರತೀಕವಾಗಿ ನಮ್ಮೊಂದಿಗಿತಲ್ವ , ಎಲ್ಲಿಗೆ ಹೋಯ್ತು ಆ ಚಡಪಡಿಕೆ ಆ ಕಾತುರ , ಕಾಗದ ಬಂದೊಡನೆ ಯಾರಿಂದ ಬಂದಿದೆ ಅನ್ನೋ ಕುತೂಹಲ, ಇಂತಿ ನಿಮ್ಮ ಪ್ರೀತಿಯ, ಎಲ್ಲೋಯ್ತ್ರಿ ಈ ಪದಗಳೆಲ್ಲ , ನೀವು ಇವತ್ತು ಕಲಿಸೋ ಇಮೈಲ್ನಲ್ಲಿ ಇದ್ನೆಲ್ಲ ಬರೀತೀರೇನ್ರಿ . ಒಂದೇ ಒಂದು ಸಾರಿ ವಾಪಾಸ್ ಹೋಗಣ ಕಣ್ರೀ, ಒಂದೇ ಒಂದ್ಸಲ ಪ್ರಯತ್ನ ಪಡೋಣ, ಮರೆತುಬಿಡ್ರಿ ಈ ಇಮೇಲ್ , ಸಂಸ್, ಎಲ್ಲ ಮರೆಯೋಣ, ಒಂದೇ ಒಂದು ವಾರಕ್ಕಾಗಿ ಮರೆಯೋಣ. ಪೋಸ್ಟ್ ಆಫೀಸೆಗೋಗಿ ಒಂದ್ ೫ ಇನ್ಲ್ಯಾಂಡ್ ಲೆಟರ್ ತರೋಣ ಆಗ ನೋಡ್ರಿ ಮಜಾ, ಯಾರಿಗ ಬರೀಬೇಕು ಅನ್ನೋದೇ ದೊಡ್ಡ ದರ್ಮ ಸಂಕಟ ಅಂಗು ಇಂಗು ಮಾಡಿ ಒಂದ್ ೫ ಜನರ ಲಿಸ್ಟ್ ಮಾಡಿದ್ರಿ ಅಂತ ಇಟ್ಕೊಳ್ಳಿ , ಅವ್ರ ಅಂಚೆ ವಿಳಾಸ ಇದೆಯೇನ್ರಿ , ಮತ್ತೆ ಕಾಗದ ಎಲ್ಲಿಗೆ ಕಲಿಸೋದು, ಒಮ್ಮೆ ಯೋಚನೆ ಮಾಡಿ ಸ್ನೇಹಿತರೆ ಓಡುವ ಆತುರದಲ್ಲಿ ನಾವೆಷ್ಟು ಮರಿತಿದೇವೆ. ಬೇಡ ಸ್ವಲ್ಪ ನಮ್ಮ ಸ್ವಂತಿಕೆಯನ್ನು ಊಳಿಸಿಕೊಳ್ಳೋಣ, ಏನಾದ್ರು ಅಂದ್ಕೊಳ್ಳಿ ಈ ವಾರ ಗ್ಯಾರಂಟಿ ೫ ಪತ್ರ ಬರ್ದೇ ಬರೀತೀನಿ, ಒಮ್ಮೆ ಯೋಚಿಸಿ ನೋಡಿ ರಿಸೀವ್ ಮಾಡದೋರ ಕುತೂಹಲ ಹೆಂಗಿರುತ್ತೆ ಅಂತ. 
ಇಂತಿ ನಿಮ್ಮ ಶ್ರೇಯೋಭಿಲಾಷಿ 
"ವಿಹಾರಿ"

ಮರೆತು ಬಿಡು

ಮೌನದ ಕೊಂಡಿಯದು
ಮನಸ್ಸಿನ ಮಂಡಿಗೆಯದು
ಅಳುವಿಲ್ಲ ನಗುವಿಲ್ಲ
ಮಾತಂತೂ ಮೊದಲೇ ಇಲ್ಲ
ಹತ್ತಾಯ್ತು ಮತ್ತೆಐದು ಆಯಿತು
ಹದಿನೈದಕ್ಕೂ ಆರದ ಗಾಯದ ಮನಸ್ಸುಗಳು.
ಊಂಡು ಮಲಗುವ ಮುನ್ನ ಕಳಚಿದ್ದ ಕಗ್ಗಂಟು ಎಷ್ಟೋ
ಈಗೇಕೆ ಈ ಪರಿ
 ಉಣ್ಣಲು ಒಲ್ಲೆ, ಮಲಗಲು ಒಲ್ಲೆ,
ಬಿಚ್ಚಲು ಒಲ್ಲೆ ಮನದಾಳದ ಗಂಟ
ಮುಗಿದಿವೆ ಕ್ರಿಯೆಗಳು ಕರ್ಮಗಳು
ಮುಗಿಯುತ್ತಿವೆ ಸಾಂತ್ವನದ ನುಡಿಗಳು
ಮರೆಯುತ್ತಿವೆ ದೂರದ ಮನಸ್ಸುಗಳು
ಸಾವಿನ ತೇರಲ್ಲಿ ಯಾರದು ತಪ್ಪಿಲ್ಲ 
ಯಾರದು ಒಪ್ಪಿಲ್ಲ
ಅವನ ಆಜ್ಞೆಯಂತೆ ನಾನೊಂದು ಬೊಂಬೆ
ಇನ್ನಾದರೂ ಮರೆಯೆ
ನನ್ನೀ ಸಾವಿನ ನೋವ.

"ವಿಹಾರಿ"