Feb 20, 2010

ಮರೆತು ಬಿಡು

ಮೌನದ ಕೊಂಡಿಯದು
ಮನಸ್ಸಿನ ಮಂಡಿಗೆಯದು
ಅಳುವಿಲ್ಲ ನಗುವಿಲ್ಲ
ಮಾತಂತೂ ಮೊದಲೇ ಇಲ್ಲ
ಹತ್ತಾಯ್ತು ಮತ್ತೆಐದು ಆಯಿತು
ಹದಿನೈದಕ್ಕೂ ಆರದ ಗಾಯದ ಮನಸ್ಸುಗಳು.
ಊಂಡು ಮಲಗುವ ಮುನ್ನ ಕಳಚಿದ್ದ ಕಗ್ಗಂಟು ಎಷ್ಟೋ
ಈಗೇಕೆ ಈ ಪರಿ
 ಉಣ್ಣಲು ಒಲ್ಲೆ, ಮಲಗಲು ಒಲ್ಲೆ,
ಬಿಚ್ಚಲು ಒಲ್ಲೆ ಮನದಾಳದ ಗಂಟ
ಮುಗಿದಿವೆ ಕ್ರಿಯೆಗಳು ಕರ್ಮಗಳು
ಮುಗಿಯುತ್ತಿವೆ ಸಾಂತ್ವನದ ನುಡಿಗಳು
ಮರೆಯುತ್ತಿವೆ ದೂರದ ಮನಸ್ಸುಗಳು
ಸಾವಿನ ತೇರಲ್ಲಿ ಯಾರದು ತಪ್ಪಿಲ್ಲ 
ಯಾರದು ಒಪ್ಪಿಲ್ಲ
ಅವನ ಆಜ್ಞೆಯಂತೆ ನಾನೊಂದು ಬೊಂಬೆ
ಇನ್ನಾದರೂ ಮರೆಯೆ
ನನ್ನೀ ಸಾವಿನ ನೋವ.

"ವಿಹಾರಿ"

No comments:

Post a Comment