ಮೌನದ ಕೊಂಡಿಯದು
ಮನಸ್ಸಿನ ಮಂಡಿಗೆಯದು
ಅಳುವಿಲ್ಲ ನಗುವಿಲ್ಲ
ಮಾತಂತೂ ಮೊದಲೇ ಇಲ್ಲ
ಹತ್ತಾಯ್ತು ಮತ್ತೆಐದು ಆಯಿತು
ಹದಿನೈದಕ್ಕೂ ಆರದ ಗಾಯದ ಮನಸ್ಸುಗಳು.
ಊಂಡು ಮಲಗುವ ಮುನ್ನ ಕಳಚಿದ್ದ ಕಗ್ಗಂಟು ಎಷ್ಟೋ
ಈಗೇಕೆ ಈ ಪರಿ
ಉಣ್ಣಲು ಒಲ್ಲೆ, ಮಲಗಲು ಒಲ್ಲೆ,
ಬಿಚ್ಚಲು ಒಲ್ಲೆ ಮನದಾಳದ ಗಂಟ
ಮುಗಿದಿವೆ ಕ್ರಿಯೆಗಳು ಕರ್ಮಗಳು
ಮುಗಿಯುತ್ತಿವೆ ಸಾಂತ್ವನದ ನುಡಿಗಳು
ಮರೆಯುತ್ತಿವೆ ದೂರದ ಮನಸ್ಸುಗಳು
ಸಾವಿನ ತೇರಲ್ಲಿ ಯಾರದು ತಪ್ಪಿಲ್ಲ
ಯಾರದು ಒಪ್ಪಿಲ್ಲ
ಅವನ ಆಜ್ಞೆಯಂತೆ ನಾನೊಂದು ಬೊಂಬೆ
ಇನ್ನಾದರೂ ಮರೆಯೆ
ನನ್ನೀ ಸಾವಿನ ನೋವ.
"ವಿಹಾರಿ"
ಕೂರ್ಮಾವತಾರ ವಿಮರ್ಶೆ
12 years ago
No comments:
Post a Comment