ಯಾರು ಕಾರಣ
ನಾನೇ, ನನ್ನೊಳಗಿನ ನಾನೇ
ಅವಮಾನಗಳ ಕೆಂಡ ನುಂಗಿ
ಕೆಂಡ ಸುಡಲು
ಕಣ್ಣೀರಿಂದ ತೋಯಿಸಿ
ಜಗಕ್ಕೆ ನಗು ಮೊಗವ ತೋರಲು
ಯಾರು ಕಾರಣ
ನಾನೇ, ನನ್ನೊಳಗಿನ ನಾನೇ
ಬೇಡವೆಂದ ಒಂದು ಮನಸ್ಸು
ಬೇಕು ಎಂದು ರಚ್ಚೆ ಹಿಡಿಯುವ ಇನ್ನೊಂದು ಮನಸ್ಸು
ಇವೆರಡ ಮಧ್ಯೆ ನಿರ್ಧಾರ ಸತ್ತ ಹೆಣ
ಬೇಡ ಅಂದ ಮನಸ್ಸ ಹಟ್ಟಿಗಟ್ಟಿ
ಬೇಕು ಅಂದ ಮನಸ್ಸ ತೆಕ್ಕೆಗೆಳೆದು
ಸೂಳೆಯರು ನಾಚುವಂತೆ ಸಿಂಗಾರ ಮಾಡಿ
ಬೀದಿ ಅಲೆದಕ್ಕೆ, ಯಾರು ಕಾರಣ
ನಾನೇ, ನನ್ನೊಳಗಿನ ನಾನೇ
ಎಲ್ಲಾ ಸುಖವ ಬಾಚಿ ತಬ್ಬಿ
ಉಂಡು ಮಲಗಿ ತಿಂದು ತೇಗಿ
ನನ್ನ ನೀ ಮರೆತು
ನಿನ್ನ ನಾ ಮರೆತು
ಮರೆತು ಕುಂತು ಮೆರೆಯುವಾಗ
ಕೆಂಡದ ಬರೆಯಿಟ್ಟವರು ಯಾರು
ನಾನೇ, ನನ್ನೊಳಗಿನ ನಾನೇ
ಹಳೆಯ ಸುಖವ ಮರೆತು
ನಾಳೆ ಪಥವ ಮನದಿ ನೆನೆದು
ಎಲ್ಲವನ್ನು ಮೀರುವ ಬೀಜ ಬಿತ್ತಿ
ಕಳೆ ತೆಗೆದು, ಸೊಗಸಾದ ತೆನೆ ಬರುವಾಗ
ಸೂತಕದ ಹಚ್ಹಡ ಹೊದಿಸಿದವರು ಯಾರು
ನಾನೇ, ನನ್ನೊಳಗಿನ ನಾನೇ
ಕೂರ್ಮಾವತಾರ ವಿಮರ್ಶೆ
12 years ago
No comments:
Post a Comment