Dec 14, 2010

ಕವಿತೆ / ಪದ್ಯ - ಸರ್ವಕಾಲಿನವೇ

ತೊಟ್ಟಿಲ ಹೊತ್ಕೊಂಡು 
ತವರ ಬಣ್ಣ ಉಟ್ಕೊಂಡು 
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು 
ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ.
ಈ ಪದ್ಯವನ್ನು ಸುಮ್ಮನೆ ಒಮ್ಮೆ ಓದಿಕೊಳ್ಳಿ, ಕವಿಯ ಭಾವನೆಗಳು ಸರ್ವಕಾಲಿನವಾಗುವುದು ಇಲ್ಲಿಯೇ. ಒಂದು ವಾದವಿದೆ ಪದ್ಯಗಳು ಸರ್ವಕಾಲಿನವಾಗಿರಬೇಕು, ಹಾಗೆ ಬರೆಯುವುದು ತುಂಬಾನೇ ಕಷ್ಟ, ಆದರೆ ಕವಿತೆ ಕೊಡುವ ಭಾವವನ್ನು ಸರ್ವಕಾಲಿನ ಮಾಡಬಹುದೇನೋ, ಮೇಲಿನ ಸಾಲುಗಳನ್ನೇ ನೋಡಿ ಪ್ರಸ್ತುತ ತೊಟ್ಟಿಲು ಇಲ್ಲ , ತಿಟ್ಟನ್ನು ಹತ್ತುವುದು ಇಲ್ಲ , ಸಾಮಾನ್ಯವಾಗಿ ಬಸ್ಸಲ್ಲೋ , ಕಾರಲ್ಲೋ ಅಥವಾ ಬೈಕಲ್ಲೋ ಹೋಗುತ್ತಾರೆ. ಇಲ್ಲಿ ಕವಿಯ ಭಾವಾರ್ಥವನ್ನು ಗಮನಿಸಿ..
ಮಗಳು ಹೆರಿಗೆಗೆ ತವರಿಗೆ ಬಂದಿದ್ದಾಳೆ, ಎಲ್ಲವು ಸುಸೂತ್ರವಾಗಿ ನೆಡೆದು ಮತ್ತೆ ಗಂಡನ ಮನೆಗೆ ಹೊರಟು ನಿಂತಿದ್ದಾಳೆ, ಹಾಲು ತುಪ್ಪ ಉಂಡು ಮಗಳು ಮತ್ತು ಮೊಮ್ಮಗು ಸುಖವಾಗಿರಲೆಂದು ಅಪ್ಪ ಒಂದು ಎಮ್ಮೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ, ಹೊರಡುವ ದಿನಕ್ಕೆ ಮಗಳಿಗೆ ಹೊಸ ಸೀರೆ ಕೊಡಿಸಿದ್ದಾನೆ ( ತವರು ಬಣ್ಣ  ಉಟ್ಕೊಂಡು) ಇವೆಲ್ಲವುಗಳ ಜೊತೆ ನಡೆದ ಮಗಳು ತವರನ್ನು ತೊರೆಯುವ
ದುಃಖದಲ್ಲಿದ್ದಾಳೆ , ದಿಬ್ಬ ಹತ್ತಿ ಇಳಿದರೆ ಗಂಡನ ಮನೆ, ದಿಬ್ಬದ ತುದಿಯಲ್ಲಿ ನಿಂತು ಪ್ರೀತಿಯಿಂದ ಕಣ್ಣಿರಾಗಿ ತವರಿನ ಮನೆ ಕಡೆಗೊಮ್ಮೆ ನೋಡುತ್ತಾಳೆ ಮತ್ತು ಹರಸುತ್ತಾಳೆ (ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ). ಈ ಪದ್ಯ ಎಷ್ಟು ಹಳೆಯದೋ ಗೊತ್ತಿಲ್ಲ, ಆದರೆ ಕವಿಯ ಭಾವಾರ್ಥ ಎಷ್ಟು ಸರ್ವಕಾಲಿನ ಎಂಬುದನ್ನು ಗಮನಿಸಿ. ಇವತ್ತಿನ ಮತ್ತು ಯಾವತ್ತಿನ ಹೆಣ್ಣು ಮಕ್ಕಳಿಗೆ ತವರಿನ ಬಗ್ಗೆ ವ್ಯಾಮೋಹ ಮತ್ತು ಮಮಕಾರ ಸ್ವಲ್ಪ ಜಾಸ್ತಿಯೇ.
ಇವತ್ತಿನ ಕಾಲದಲ್ಲಿ ಹೆರಿಗೆಗೆ ಬಂದ ಮಗಳಿಗೆ ಅಪ್ಪ ಎಮ್ಮೆ ಕೊಡದೆ ಇರಬಹುದು, ಆದರೆ ಮಗಳು ಮತ್ತು ಮಮ್ಮೊಗು ತಿಂದುಂಡು ಆರೋಗ್ಯವಾಗಿರಲೆಂದು ಹರಸುತ್ತಾನೆ, ಇವತ್ತು ತಿಟ್ಟಿನ ಕೆಳಗೆ ಗಂಡನ ಮನೆಯಿಲ್ಲ ನೂರಾರು ಸಾವಿರಾರು ಮೈಲಿ ದೂರ, ಆದರು ತವರಿನಿಂದ ಹೊರಟ ಮಗಳು ಬಸ್ಸಿನಲ್ಲೋ, ಕಾರಿನಲ್ಲೋ ಅಥವಾ ರೈಲಿನಲ್ಲೋ ಕುಳಿತು ಕೊನೆಯ ನಿಮಿಷದಲ್ಲಿ ಕಣ್ಣಿರಾಗುತ್ತಾಳೆ ಮತ್ತು ಕಣ್ಣು ಹಾಯುವವರೆಗೂ ಕೈ ಬಿಸುತ್ತಲೋ ಅವರನ್ನೇ ನೋಡುತ್ತಾಳೆ.
ಹಾಗಾದರೆ ಮೇಲಿನ ಪದ್ಯ ಸರ್ವಕಾಲಿಕವೇ ? ಅಥವಾ ಪದ್ಯದ ಭಾವಾರ್ಥ ಸರ್ವಕಾಲಿಕವೇ.

ಕೆ.ಎಸ್.ಏನ್ ರವರ  ಈ ಕೆಳಗಿನ ಸಾಲುಗಳನ್ನು ಒಮ್ಮೆ ಓದಿಕೊಳ್ಳಿ 
ಮೊದಲ ದಿನ ಮೌನ 
ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ.....
ಈಗಿನ ಹುಡುಗಿಯರನ್ನು ಕೇಳಿ ನೋಡಿ, ಮೌನವು ಇಲ್ಲ ಮಣ್ಣು ಇಲ್ಲ ಮದುವೆಗೆ ಮುಂಚೆಯೇ ಮೊಬೈಲ್ ನಲ್ಲಿ ಬೇಕಾದಷ್ಟು ಮತಾಡಿದ್ದಿವಿ, ಹರಟಿದ್ದಿವಿ, ಸಿನೆಮಾ ನೋಡಿದ್ದೀವಿ, ಪಾರ್ಕ್ ನಲ್ಲಿ ಕೂತು ಐಸ್ ಕ್ರೀಂ ತಿಂದಿದ್ದೀವಿ ಮೌನ ಎಲ್ಲಿಂದ ಬಂತು ...ಅಂತದೆಲ್ಲ ಏನು ಇಲ್ಲ ಅನ್ತಾರೆ, (ಅಂದರೆ   ಕೆ.ಎಸ್.ಏನ್ ರವರ ಈ ಕವಿತೆ ಇವತ್ತಿನ ಯುವಕರಿಗೆ ಪುಳಕ ಉಂಟು ಮಾಡುವಲ್ಲಿ ಸೋತಿತೆ. ಖಂಡಿತ ಇಲ್ಲ )
ಹೌದು ಒಪ್ಪೋಣ ಇವೆಲ್ಲವಕ್ಕೂ ಮುಂಚೆ ನಿಮ್ಮ ಮೊದಲ ಭೇಟಿ ಮೌನವಾಗಿರಲ್ಲಿಲವೇ, ಒಂದಷ್ಟು ಪಿಸುಮಾತು, ಒಂದಷ್ಟು ಕಂಪನ, ಮುಜುಗರ, ಪುಳಕ ಇವೆಲ್ಲವನ್ನೂ ಅನುಭವಿಸಿದ ಮೇಲೆ ತಾನೇ ಮೊಬೈಲಿನಲ್ಲಿ ಹರಟೆ ಮತ್ತೊಂದು ಶುರುವಾದುದು.
ಹಾಗಾದರೆ ಪದ್ಯ / ಕವಿತೆ  ಅಥವಾ ಅದರ ಭಾವಾರ್ಥ ಸರ್ವಕಾಲಿನವಾಗಿರಬೇಕೆ ?.

ಇದಕ್ಕೆ ವಿರುದ್ಧವಾಗಿ ಇಲ್ಲಷ್ಟು ಅಂಶಗಳಿವೆ ನೋಡಿ

ಸಿದ್ದಲಿಂಗಯ್ಯ ನವರ ಈ ಕೆಳಗಿನ ಸಾಲುಗಳನ್ನು ಒಮ್ಮೆ ಓದಿಕೊಳ್ಳಿ.

ದಲಿತರು ಬಂದರು ದಾರಿ ಬಿಡಿ 
ದಲಿತರ ಕೈಗೆ ರಾಜ್ಯ ಕೊಡಿ 
ಬೆಳಗಾಯಿತು ಬಡವರಿಗೆ.
ಈ ಸಾಲುಗಳು ಅವರ ಹೋರಾಟದ ದಿನಗಳಲ್ಲಿ ಹುಟ್ಟಿದವು, ಹೋರಾಟ ಮುಗಿದ ಮೇಲೆ ಈ ಪದ್ಯಗಳಿಗೆ ಅರ್ಥವೇನು, ಈ ಪದ್ಯ ಹುಟ್ಟುವಾಗಿನ ಸನ್ನಿವೇಶ ನೆನಪು ಮಾಡಿಕೊಳ್ಳಿ, ಅವು ಹೋರಾಟದ ದಿನಗಳು, ಬಹಳ ಸಂದಿಗ್ದ ಕಾಲ, ಹೊರಗಿನವರೊಡನೆ ಹೋರಾಡಬಹುದು , ಆದರೆ ಇವರ ಹೋರಾಟ ಒಳಗಿನವರ ಜೊತೆಯಾಗಿತ್ತು ತನ್ನದೇ ಜನಗಳ ಜೊತೆ ಹಕ್ಕಿನ ಹೋರಾಟವಾಗಿತ್ತು.

ಇದೆ ಕವಿಯ ಮತ್ತೊಂದು ಕವಿತೆ  ನೋಡಿ 

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ 
ಸುಳಿದಾಡಬೇಡ ಗೆಳತಿ 
ಸುಟ್ಟಾವು ಬೆಳ್ಳಿ ಕಿರಣ 

ಆಹಾ ಎಂತ ಅದ್ಭುತ ಕಲ್ಪನೆ, ಇವೆಲ್ಲದರ ನಡುವೆ ತಟ್ಟನೆ ನೆನಪಾಗುವುದು ಆಡಿಗರ ಕವಿತೆ 

ಕಟ್ಟುವೆವು ನಾವು ಹೊಸ ನಾಡೊಂದನ್ನು 
ರಸದ ಬೀಡೊಂದನ್ನು
ಬಿಸಿ ನೆತ್ತರು ಉಕ್ಕಿ ಆರಿ ಹೋಗುವ ಮುನ್ನ 
ಕಟ್ಟುವೆವು ನಾವು ಹೊಸ ನಾಡೊಂದನ್ನು 
ರಸದ ಬೀಡೊಂದನ್ನು

ಈಗಿನ ರಾಜಕೀಯ ದೊಂಬರಾಟವನ್ನು ನೋಡಿದರೆ ಆಡಿಗರ ಈ ಕವಿತೆ ಯುವಕರ ಮನಸ್ಸಿನಲ್ಲಿ ಸರ್ವಕಾಲಿನ.

" ನಿಮ್ಮೂರ ಬಂಡಿಯಲ್ಲಿ ನಮ್ಮೊರ ಬಿಟ್ಟಾಗ 
  ಓಡಿದುದು ದಾರಿ ಬೇಗ "

ಈ ಸಾಲುಗಳಿಗೆ ನೀವೇನ್ ಅಂತಿರಾ 


 

No comments:

Post a Comment